ಕ್ಷಣ ಕ್ಷಣಕ್ಕೂ ಕೆರಳುತ್ತಿದ್ದ ಕುತೂಹಲ. ಪ್ರೇಕ್ಷಕರನ್ನು ಹಿಡಿದಿಟ್ಟ ಧ್ವನಿ ಬೆಳಕಿನ ಮಾಯಾಜಾಲ. ಅಂಬೇಡ್ಕರ್ ಎಂದರೆ ಬರಿ ಸಂವಿಧಾನಿ ಶಿಲ್ಪಿ ಅಲ್ಲ ಅವರು ಈ ಮಣ್ಣಿನ ನಿಜ ಅವಧೂತ ಭಾರತ ಭಾಗ್ಯ ವಿಧಾತ ಎಂದು ಅರಿತುಕೊಂಡ ಸುವರ್ಣ ಘಳಿಗೆ. ಅಂಬೇಡ್ಕರ್ ಜೀವನದ ಯಶೋಗಾಥೆಯನ್ನು ಸಾರುವ ‘ಭಾರತ ಭಾಗ್ಯ ವಿಧಾತ” ದಾರವಾಡದಲ್ಲಿ ಅನಾವರಣಗೊಂಡಿದ್ದು ಹೀಗೆ.