ಎಂಭತ್ತು ಕಲಾವಿದರ ತಂಡವದು. ರಾಜ್ಯದ ಎಲ್ಲಾ ಜಿಲ್ಲೆಗಳಿಂದಲೂ ಕಲಾವಿದರ ಆಯ್ಕೆಯಾಗಿದೆ. ಹೊರ ರಾಜ್ಯಗಳ ಕಲಾವಿದರೂ ಉಂಟು ಇವರೆಲ್ಲರೂ ವೇದಿಕೆಯಲ್ಲಿ ಅನಾವರಣಗೊಳಿಸೋದು ‘ಭಾರತ ಭಾಗ್ಯ ವಿಧಾತ’ ಧ್ವನಿ-ಬೆಳಕಿನ ದೃಶ್ಯ ಕಾವ್ಯ. ಈ ಕಾರ್ಯಕ್ರಮದ ಪರಿಕಲ್ಪನೆ, ನಿರ್ದೇಶನ, ಸಂಗೀತ, ಕಲಾ ಪ್ರಕಾರಗಳು, ವಸ್ತ್ರವಿನ್ಯಾಸ, ನೃತ್ಯ ಸಂಯೋಜನೆ ಜನ ಮನಗೆದ್ದಿವೆ.